Skip to main content

ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರೀ ಕ್ಷೇತ್ರ ಕನಕಗಿರಿ.

 ಕನಕಗಿರಿ ಶ್ರೀ ಗುರುವರನೆ

ಭುವನಕೀರ್ತಿ ಯತಿವರನೆ

ಧರ್ಮಮಾರ್ಗದಿ ಸಾಗಲು

ಸನ್ಮಾರ್ಗವನು ಕರುಣಿಪನೆ

ಅನುದಿನ ತಪವನು ಮಾಡುತಲಿ

ಯತಿಧರ್ಮ ನಿಯಮದಿ ಸಾಗುತಲಿ

ಪೂಜ್ಯಪಾದರ ಅನುರೂಪರೆನಿಸಿಹ

ಶ್ರೀ ಜಿನದರ್ಮ ಪೀಠಾಲಂಕೃತನೆ


ಉದಯದಿ ಜಿನಪೂಜೆಯ ಗೈಯುತಲಿ

ಮೋಕ್ಷಮಾರ್ಗವನು ಬೇಡುತಲಿ

ಭಕ್ತರ ಭಾವಸಂಕಲ್ಪವ ಮಾಡುತ

ಶಾಸನದೇವಿಗೆ ಅರ್ಚನೆ ಗೈದಿಹನೆ


ಭಕ್ತರ ಕಷ್ಟವ ಶಾಂತಚಿತ್ತದಿ ಆಲಿಸುತಾ

ಧರ್ಮಕರ್ಮದ ಸಮನ್ವಯ ಬೋಧಿಸುತಾ

ಸಾಂತ್ವನ ನುಡಿಯ ಬಯಸಿ ಬಂದಿಹ

ಭಕ್ತರ ಸುಖಕೆ ದಾರಿಯ ತೋರಿಪನೆ


ಜ್ಞಾನವ ಕರುಣಿಪ ಪಾರ್ಶ್ವ ಜಿನರಲಿ

ಅಭಿಷೇಕ ಪೂಜೆಯ ಗೈಯುತಲಿ

ಜಿನಧರ್ಮ ತತ್ವದ ಬೋಧಕನೆನಿಸಿಹ

ಪೂಜ್ಯಪಾದರ ಅವತಾರದಿ ನಿಂತಿಹನೆ


ಭುವನಕೀರ್ತಿ ಭಟ್ಟಾರಕ ಯತಿವರನೆ

ಕರುಣದಿ ಭಕುತರ ಕಾಯುವನೆ

ಶ್ರೀಕನಕಗಿರಿ ತಪೋಭೂಮಿಯಲಿ

ಜಿನಶಾಸನ ಸಿಂಹಾಸನಾಲಂಕೃತನೇ


ರಚನೆ: ವೀರೇಂದ್ರ ಬೇಗೂರ್ ಹಾಸನ

Comments

Popular posts from this blog

Namokara Mahamantra | ನಮೋಕಾರ ಮಹಾಮಂತ್ರ

ನಮೋ ಅರಿಹಂತಾಣಂ ನಮೋ ಸಿದ್ಧಾಣಂ ನಮೋ ಆಯರಿಯಾಣಂ ನಮೋ ಉವಜ್ಝಾಯಾಣಂ ನಮೋ ಲೊಯೆ ಸಾವ್ವಸಾಹೂಣಂ. ಏಸ್ಸೋ ಪಂಚ ನಮೋಕಾರೋ, ಸವ್ವ ಪಾವಪ್ಪಣಾಸಣೋ ಮಂಗಳಾಣಂ ಚ ಸವ್ವೆಸಿಂ, ಪದಮಂ ಹವೈ ಮಂಗಳಂ. YouTube ಅರ್ಥ: ಅರಿಹಂತರುಗೆ ನಮಸ್ಕಾರ ಸಿದ್ಧರುಗೆ ನಮಸ್ಕಾರ ಆಚಾರ್ಯರುಗೆ ನಮಸ್ಕಾರ ಉಪಾಧ್ಯಾಯರುಗೆ ನಮಸ್ಕಾರ ಸಂಪೂರ್ಣ ಸಾಧು-ಸಾಧ್ವಿಗಳುಗೆ ನಮಸ್ಕಾರ.   ನಮೋಕಾರ ಮಂತ್ರದಿಂದ ಸಕಲ ಪಾಪಗಳು ನಾಶವಾಗುತ್ತವೆ ಮತ್ತು ಇದು ಎಲ್ಲಾ ಮಂಗಳಗಳಲ್ಲಿಯೂ ಶ್ರೇಷ್ಠ ಮಂಗಳವಾಗಿದೆ. ಈ ಮಂತ್ರವನ್ನು ನಿತ್ಯ ಜಪಿಸುವ ಮೂಲಕ ಆತ್ಮಶುದ್ಧಿ, ಶಾಂತಿ ಮತ್ತು ಧಾರ್ಮಿಕ ಶಕ್ತಿಯನ್ನು ಸಾಧಿಸಬಹುದು.

ಪತ್ರಿಕಾ ಸುದ್ದಿಗೋಷ್ಠಿ ಮಾಡಿ 29/05/2025 ರಿಂದ ನಡೆಯುವ ಉಪವಾಸ ಸತ್ಯಾಗ್ರಹದ ಬಗ್ಗೆ ಮಾಹಿತಿ ಕೊಡಲಾಯಿತು.

29/05/2025 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಉಪವಾಸ ಸತ್ಯಾಗ್ರಹ.  ಪತ್ರಿಕಾ ಸುದ್ದಿಗೋಷ್ಠಿ ಮಾಡಿ 29/05/2025 ರಿಂದ ನಡೆಯುವ ಉಪವಾಸ ಸತ್ಯಾಗ್ರಹದ ಬಗ್ಗೆ ಮಾಹಿತಿ ಕೊಡಲಾಯಿತು. ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತರಿಗೆ ಇರುವ ಹಕ್ಕುಗಳು ಮತ್ತು ಸವಲತ್ತುಗಳು ಜೈನರಿಗೆ ಕೊಡುವುದರಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಬಹಳಷ್ಟು ಸಲ ಮುಖ್ಯಮಂತ್ರಿ, ಸಚಿವರು ಮತ್ತು ಸಂಭಂದಪಟ್ಟ ಅಧಿಕಾರಿಗಳಿಗೆ ಮನವಿ ಕೊಡಲಾಗಿದೆ, ಬಹಳಷ್ಟು ಸಲ ಹೋರಾಟವು ಕೂಡಾ ಮಾಡಲಾಗಿದೆ, ಆದರೆ ಸರ್ಕಾರ ಇನ್ನು ಬೇಡಿಕೆಗಳನ್ನು ಒಪ್ಪಿಕೊಂಡು ನಿರ್ಣಯ ತೆಗೆದುಕೊಂಡಿಲ್ಲ.  ಈಗ ಅನಿವಾರ್ಯತೇಯಿಂದ 29/05/2025 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಉಪವಾಸ ಸತ್ಯಾಗ್ರಹ ಮಾಡಲಾಗಿವುದು. 7 ಮಹತ್ವದ ಬೇಡಿಕೆಗಳು. 1- ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಪ್ರತಿ ವರ್ಷ Rs.200 ಕೋಟಿ ಜೈನ ಅಭಿವೃದ್ಧಿ ನಿಗಮಕ್ಕೆ ಕೊಡಬೇಕು. 2-ಕರ್ನಾಟಕ ಸರಕಾರದ 414 ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳಲ್ಲಿ (314 ಹಳೆಯ+100 ಹೊಸ) ಪ್ರತಿ ಜಿಲ್ಲೆಯಲ್ಲಿ ಒಂದು ಮತ್ತು ಜೈನ ಜನಸಂಖ್ಯೆ ಹೆಚ್ಚು ಇರುವ ಜಿಲ್ಲೆಗಳಲ್ಲಿ ಮತ್ತು ಶೈಕ್ಷಣಿಕ ಕೇಂದ್ರ ಇರುವ ನಗರಗಳಲ್ಲಿ ಎರಡು ವಿದ್ಯಾರ್ಥಿನಿಲಯಗಳು ಜೈನರ ಸಲುವಾಗಿ ಇಡಬೇಕು. ಬರೀ ಸಸ್ಯಾಹಾರಿ ವಿದ್ಯಾರ್ಥಿ ನಿಲಯಗಳು ಇದ್ದಲ್ಲಿ 50% ಮೀಸಲಾತಿ ಜೈನ ವಿದ್ಯಾರ್ಥಿಗಳಿಗೆ ಇಡಬೇಕು. 3- ಇಲ್ಲಿಯವರೆಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃ...

ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಶಾಂತಿನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ!?

 ಜೈ ಜಿನೇಂದ್ರ ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಶಾಂತಿನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ!🙏 ಕಾಲ ಅನಾದಿ ಭವ ತಾಪ ಸೇ, ದುಃಖ ಅನಂತ ಸಹಾ ಕರತಾ! ನಿಜ ಚೈತನ್ಯ ಸದನೇ ಪ್ರಭುವರ, ಕ್ರೋಧಾನಲ ಧೂ- ಧೂ ಜಲತಾ!! ಸಾರೇ ದರ್ ಛೋಡ್ ಪ್ರಭು ಜೀ, ಆಜ್ ಆಪಕೇ ದರ ಆಯಾ! ಶಾಂತಿನಾಥ ಜಿನವರ ಚರಣೋಂ ಮೇ, ಶೀತಲತಾ ಪಾನೇ ಆಯಾ!! ಓಂ ಹ್ರೀಂ ಶ್ರೀಂ ಕ್ಲೀಂ ಐಂ ಅರ್ಹಂ ಶ್ರೀ ಶಾಂತಿನಾಥ ತೀರ್ಥಂಕರಾಯ ಪರಮಜಿನದೇವಾಯ ಭವತಾಪ ನಿವಾರಣಾಯ ದಿವ್ಯ ಚಂದನಂ ನಿರ್ವಪಾಮೀ ಸ್ವಾಹ!! ಶಾಂತಿ ವಿಧಾಯಕ, ಶಾಂತಿ‌ಜಿನೇಶ್ವರ, ನರ ಸುರಪತಿ ಸೇ ವಂದಿತ ಹೈಂ! ಸೋಲಹವೇ ತೀರ್ಥಂಕರ ಸ್ವಾಮೀ, ತೀನ್ ಲೋಕ ಮೇ ಪೂಜಿತ ಹೈಂ!! ದ್ವಾದಶ ಕಾಮದೇವ , ಚಕ್ರೀಶ್ವರ, ಪಂಚಮ ಪದ ಕೇ ಧಾರೀ ಹೈಂ! ಬಾಲಪನ್ ಮೇ ಅಣುವ್ರತಧಾರೀ, ಪ್ರಾಣಿ ಮಾತ್ರ ಹಿತಕಾರೀ ಹೈಂ!! ಚರಣೋಂ ಮೇ ಹರಿಣ ಚಿನ್ಹ ಶಾಂತಿನಾಥ ಪ್ರತಿಮಾ ಅಭಿರಾಮಾ! ಜೋ ಮನ ವಚ ತನ ಸೇ ಪೂಜೇ ವೇ ಜನ ಪಾತೇ ಹೈ ಶಿವಧಾಮ!! ಜಯ ಹೋ..! ಜಯ ಹೋ..!! ಜಯ-ಜಯ-ಜಯ ಹೋ...!!! 🙏🙏🙏