Skip to main content

ಭವ್ಯರೇ ಮುನಿಗಳ ಚಾತುರ್ಮಾಸ ಬರುತ್ತಿದೆ ಬನ್ನಿರಿ ಭಕ್ತಿ ಮಾಡೋಣ.

ಭವ್ಯರೇ ಮುನಿಗಳ ಚಾತುರ್ಮಾಸ ಬರುತ್ತಿದೆ ಬನ್ನಿರಿ ಭಕ್ತಿ ಮಾಡೋಣ.

ಭವ್ಯರೇ ಮಳೆಗಾಲ ಬಂತೆಂದರೆ ಜೈನರಿಗೆ ಎಲ್ಲಿಲ್ಲದ ಸಡಗರ. ಧಾರ್ಮಿಕ ಅಭಿರುಚಿ ಇದ್ದವರಿಗೆ ತ್ಯಾಗಿಗಳ ಚಾತುರ್ಮಾಸ ಹಬ್ಬವೇ ಸರಿ. ಸಾಲು ಸಾಲು ಪ್ರವಚನಗಳು, ಆರಾಧನೆಗಳು, ವಿಧಾನಗಳು, ಪೂಜೆಗಳು ತ್ಯಾಗಿಗಳ ಸಮ್ಮುಖದಲ್ಲಿ ನಡೆಯಲಿದ್ದು ಭಕ್ತ ಜನರು ಅದರಲ್ಲಿ ಪಾಲ್ಗೊಳ್ಳುವ ಸದಾವಕಾಶ ದೊರಕುತ್ತದೆ. ಇದು ಒಂದು ರೀತಿಯಲ್ಲಿ ಆಧುನಿಕತೆಯ ಭರಾಟೆಯಲ್ಲಿ ಬದುಕುವ ನಮಗೆ ಕೊಂಚ ಸಮಾಧಾನವನ್ನು ನೀಡುತ್ತದೆ. ಪ್ರವಚನಗಳಿಂದ ಜೈನ ಧರ್ಮದ ಒಳತಿರುಳು, ಭವ್ಯತೆ, ಗೂಢ ವಿಷಯಗಳು, ಹಿರಿಮೆಗರಿಮೆ, ವೈಭವಗಳ ಪರಿಚಯವಾಗುತ್ತದೆ. ಆಸ್ವಾದನೆ ಮಾಡುವವರಿಗೊಂದು ಸುವರ್ಣಾವಕಾಶ. 


ಯಾವುದನ್ನು ಮಾಡಬೇಕು

ಇಷ್ಟೇ ಅಲ್ಲದೇ ತ್ಯಾಗಿಗಳಿಗೆ ಆಹಾರ ದಾನ ಮಾಡುವ ಸುಯೋಗವೂ ಲಭಿಸುತ್ತದೆ. ದಾನಗಳಲ್ಲೇ ಸರ್ವೋತ್ಕೃಷ್ಟವಾದ ದಾನ ಆಹಾರ ದಾನವಾಗಿರುತ್ತದೆ. ನವಧಾ ಭಕ್ತಿಯಿಂದ ಆಹಾರ ದಾನ ಮಾಡುವುದು ಜೈನ ಪರಂಪರೆಯಲ್ಲಿ ಅನಾದಿಕಾಲದಿಂದ ನಡೆದುಕೊಂಡು ಬಂದ ಮಹತ್ತತೆಯಾಗಿದೆ. ಮುನಿಗಳ ಉಪಕರಣ ಅಂದರೆ ಪಿಂಛಿ, ಕಮಂಡಲ, ಶಾಸ್ತ್ರಗಳನ್ನು ಕೂಡ ದಾನ ಮಾಡುವ ಅವಕಾಶ ಇದೆ. ಮುನಿಗಳ ಆರೋಗ್ಯಕ್ಕೆ ಪೂರಕವಾಗುವ ಅವರ ವ್ರತಾಚರಣೆಗಳಿಗೆ ಸಮ್ಮತವಾಗುವಂತಹ ಔಷಧವನ್ನು ದಾನ ಮಾಡಬಹುದು. ಒಟ್ಟಿನಲ್ಲಿ ತ್ಯಾಗಿಗಳ ಸೇವೆ ನಮಗೆ ಸೌಭಾಗ್ಯವಾಗಿರುತ್ತದೆ. ಆದರೆ ಈ ಸೌಭಾಗ್ಯದಲ್ಲಿ ನಮ್ಮ ಕುಟುಂಬದ ಎಲ್ಲಾ ಸದಸ್ಯರಿಗೆ ಪಾಲ್ಗೊಳ್ಳುವಂತೆ ನಾವು ಮಾಡಬೇಕಿದೆ. ಅಂದರೆ ನಮ್ಮ ಮನೆಯ ಮಕ್ಕಳನ್ನು ಕೂಡ ಈ ಪ್ರಕ್ರಿಯೆಗಳಲ್ಲಿ ಭಾಗವಹಿಸುವಂತೆ ಮಾಡಬೇಕು. ಮಕ್ಕಳು ನಮ್ಮ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲೇಬೇಕು ಎಂಬ ಆಶಯ ನಮ್ಮದಾಗಲಿ. 


ಯಾವುದನ್ನು ಮಾಡಬಾರದು

ತ್ಯಾಗಿಗಳ ಬಳಿ ಯಾವುದೇ ಸಮಸ್ಯೆಗಳನ್ನು ತರದೇ ಇರುವುದು ಒಳ್ಳೆಯದು. ಮುನಿಗಳು ಮೋಕ್ಷ ಪಥದ ಅನ್ವೇಷಣೆಯಲ್ಲಿ ಇರುವವರು. ಅವರ ಸಾಧನಾ ಪಥಕ್ಕೆ ನಾವುಗಳು ಅನುಮೋದನೆಯನ್ನು ನೀಡಬೇಕು. ಮುನಿಗಳನ್ನು ಪರಿಗ್ರಹಿಗಳನ್ನಾಗಿ ನಾವು ಮಾಡಬಾರದು. ಕೆಲವರು ಮುನಿಗಳಿಗೆ ಅವರ ಉಪಕರಣಗಳ ಹೊರತು ಯಾವುದೇ ವಸ್ತುಗಳನ್ನು ನೀಡಿದರೂ ಅದು ಮುನಿಗಳಿಗೆ ಪರಿಗ್ರಹವಾಗುತ್ತದೆ. ಎಂದಿಗೂ ಮುನಿಗಳ ಭವ್ಯ ಪರಂಪರೆಗೆ ನಾವುಗಳು ಚ್ಯುತಿ ತಾರದೇ ಇರುವುದು ನಾವು ಮುನಿಗಳಿಗೆ ಮಾಡುವ ನಿಜವಾದ ಸೇವೆ ಆಗಿರುತ್ತದೆ.



ಮುನಿಗಳಿಗೆ ಜಯಕಾರ ಹೇಳೋಣ

ಭವ್ಯ ಮುನಿಗಳನ್ನು ಭಕ್ತಿಯಿಂದ ಸ್ವಾಗತಿಸೋಣ. ಅವರಿಗೆ ಜಯಕಾರ ಹೇಳೋಣ. ಸಾಧ್ಯವಿರುವ ಸೇವೆಯನ್ನು ಮಾಡೋಣ. ಈ ಕಲಿಯುಗದಲ್ಲೂ ಸಕಲ ಪರಿಗ್ರಹಗಳನ್ನು ತೊರೆದು ಜಿನಧರ್ಮದ ಪ್ರಭಾವನೆಯನ್ನು ಮಾಡುತ್ತಿರುವ ಈ ದಿಗಂಬರ ಸಂತರನ್ನು ಸೇವೆಯಿಂದ ಸಂಪ್ರೀತಿಗೊಳಿಸೋಣ. ನಮೋಸ್ತು , ನಮೋಸ್ತು, ನಮೋಸ್ತು ಎನ್ನೋಣ.

ನಿರಂಜನ್ ಜೈನ್ ಕುದ್ಯಾಡಿ

Comments

Popular posts from this blog

Namokara Mahamantra | ನಮೋಕಾರ ಮಹಾಮಂತ್ರ

ನಮೋ ಅರಿಹಂತಾಣಂ ನಮೋ ಸಿದ್ಧಾಣಂ ನಮೋ ಆಯರಿಯಾಣಂ ನಮೋ ಉವಜ್ಝಾಯಾಣಂ ನಮೋ ಲೊಯೆ ಸಾವ್ವಸಾಹೂಣಂ. ಏಸ್ಸೋ ಪಂಚ ನಮೋಕಾರೋ, ಸವ್ವ ಪಾವಪ್ಪಣಾಸಣೋ ಮಂಗಳಾಣಂ ಚ ಸವ್ವೆಸಿಂ, ಪದಮಂ ಹವೈ ಮಂಗಳಂ. YouTube ಅರ್ಥ: ಅರಿಹಂತರುಗೆ ನಮಸ್ಕಾರ ಸಿದ್ಧರುಗೆ ನಮಸ್ಕಾರ ಆಚಾರ್ಯರುಗೆ ನಮಸ್ಕಾರ ಉಪಾಧ್ಯಾಯರುಗೆ ನಮಸ್ಕಾರ ಸಂಪೂರ್ಣ ಸಾಧು-ಸಾಧ್ವಿಗಳುಗೆ ನಮಸ್ಕಾರ.   ನಮೋಕಾರ ಮಂತ್ರದಿಂದ ಸಕಲ ಪಾಪಗಳು ನಾಶವಾಗುತ್ತವೆ ಮತ್ತು ಇದು ಎಲ್ಲಾ ಮಂಗಳಗಳಲ್ಲಿಯೂ ಶ್ರೇಷ್ಠ ಮಂಗಳವಾಗಿದೆ. ಈ ಮಂತ್ರವನ್ನು ನಿತ್ಯ ಜಪಿಸುವ ಮೂಲಕ ಆತ್ಮಶುದ್ಧಿ, ಶಾಂತಿ ಮತ್ತು ಧಾರ್ಮಿಕ ಶಕ್ತಿಯನ್ನು ಸಾಧಿಸಬಹುದು.

ಪತ್ರಿಕಾ ಸುದ್ದಿಗೋಷ್ಠಿ ಮಾಡಿ 29/05/2025 ರಿಂದ ನಡೆಯುವ ಉಪವಾಸ ಸತ್ಯಾಗ್ರಹದ ಬಗ್ಗೆ ಮಾಹಿತಿ ಕೊಡಲಾಯಿತು.

29/05/2025 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಉಪವಾಸ ಸತ್ಯಾಗ್ರಹ.  ಪತ್ರಿಕಾ ಸುದ್ದಿಗೋಷ್ಠಿ ಮಾಡಿ 29/05/2025 ರಿಂದ ನಡೆಯುವ ಉಪವಾಸ ಸತ್ಯಾಗ್ರಹದ ಬಗ್ಗೆ ಮಾಹಿತಿ ಕೊಡಲಾಯಿತು. ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತರಿಗೆ ಇರುವ ಹಕ್ಕುಗಳು ಮತ್ತು ಸವಲತ್ತುಗಳು ಜೈನರಿಗೆ ಕೊಡುವುದರಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಬಹಳಷ್ಟು ಸಲ ಮುಖ್ಯಮಂತ್ರಿ, ಸಚಿವರು ಮತ್ತು ಸಂಭಂದಪಟ್ಟ ಅಧಿಕಾರಿಗಳಿಗೆ ಮನವಿ ಕೊಡಲಾಗಿದೆ, ಬಹಳಷ್ಟು ಸಲ ಹೋರಾಟವು ಕೂಡಾ ಮಾಡಲಾಗಿದೆ, ಆದರೆ ಸರ್ಕಾರ ಇನ್ನು ಬೇಡಿಕೆಗಳನ್ನು ಒಪ್ಪಿಕೊಂಡು ನಿರ್ಣಯ ತೆಗೆದುಕೊಂಡಿಲ್ಲ.  ಈಗ ಅನಿವಾರ್ಯತೇಯಿಂದ 29/05/2025 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಉಪವಾಸ ಸತ್ಯಾಗ್ರಹ ಮಾಡಲಾಗಿವುದು. 7 ಮಹತ್ವದ ಬೇಡಿಕೆಗಳು. 1- ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಪ್ರತಿ ವರ್ಷ Rs.200 ಕೋಟಿ ಜೈನ ಅಭಿವೃದ್ಧಿ ನಿಗಮಕ್ಕೆ ಕೊಡಬೇಕು. 2-ಕರ್ನಾಟಕ ಸರಕಾರದ 414 ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳಲ್ಲಿ (314 ಹಳೆಯ+100 ಹೊಸ) ಪ್ರತಿ ಜಿಲ್ಲೆಯಲ್ಲಿ ಒಂದು ಮತ್ತು ಜೈನ ಜನಸಂಖ್ಯೆ ಹೆಚ್ಚು ಇರುವ ಜಿಲ್ಲೆಗಳಲ್ಲಿ ಮತ್ತು ಶೈಕ್ಷಣಿಕ ಕೇಂದ್ರ ಇರುವ ನಗರಗಳಲ್ಲಿ ಎರಡು ವಿದ್ಯಾರ್ಥಿನಿಲಯಗಳು ಜೈನರ ಸಲುವಾಗಿ ಇಡಬೇಕು. ಬರೀ ಸಸ್ಯಾಹಾರಿ ವಿದ್ಯಾರ್ಥಿ ನಿಲಯಗಳು ಇದ್ದಲ್ಲಿ 50% ಮೀಸಲಾತಿ ಜೈನ ವಿದ್ಯಾರ್ಥಿಗಳಿಗೆ ಇಡಬೇಕು. 3- ಇಲ್ಲಿಯವರೆಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃ...

ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ವಿಮಲನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ!

ಜೈ ಜಿನೇಂದ್ರ ಹೇ ಪ್ರಭುವರ ತುಮ ಶಾಂತ ಸೌಮ್ಯ ಹೋ, ಶೀತಲ ಚಂದನ‌ ಲೇ ಆಯಾ! ಕ್ರೋಧಾನಲ ಸೇ ದೂರ ರಹ್ಞೂಂ ಮೈ, ಅತಃ ಶರಣ ಮೇ ಹ್ಞೂಂ ಆಯಾ!! ತಪ್ತ ಹೋ ರಹಾ ಭವ ತಾಪ ಸೇ, ಸಮತಾ ರಸ ಕಾ ಪಾನ ಕರೂಂ! ಗುಣ ಅನಂತಮಯ ಚಂದನ ಪಾನೇ, ಆತ್ಮ ತತ್ವ ಕಾ ಧ್ಯಾನ ಕರೂಂ!! ಓಂ ಹ್ರೀಂ ಶ್ರೀಂ ಕ್ಲೀಂ ಐಂ ಅರ್ಹಂ ಶ್ರೀ ವಿಮಲನಾಥ ತೀರ್ಥಂಕರಾಯ ಪರಮಜಿನದೇವಾಯ ಭವತಾಪ ನಿವಾರಣಾಯ ದಿವ್ಯ ಚಂದನಂ ನಿರ್ವಪಾಮೀ ಸ್ವಾಹ!! ವಿಮಲನಾಥ ಜಿನ ಭವಭಯಹಾರೀ, ಜ್ಞಾನಮೂರ್ತಿ ಶಿಶು ಸಮ ಅವಿಕಾರೀ! https://youtube.com/@devipadmavatimata?si=HmsqZbibGK5G7cfr ಪರಮ ದಿಗಂಬರ ಮುದ್ರಾಧಾರಿ, ಶರಣಾಗತ ಕೋ ಮಂಗಲಕಾರೀ!! ತೇರಹವೇ ತೀರ್ಥಂಕರ ಸ್ವಾಮೀ, ದಯಾ ಮೂರ್ತಿ ಆತಮ ಅಭಿರಾಮೀ! ತೇರಹ ವಿಧಿ ಚಾರಿತ್ರ ಬತಾಯ, ದಿವ್ಯ ಧ್ವನಿ ಮೆ ಜ್ಞಾನ‌ಕರಾಯ!! ಶೂಕರ ಚಿನ್ಹ ಶೋಭಿತ ವಿಮಲನಾಥ ಉರಧಾರ ಮನ ವಚ ತನ ಸೇ ಜೋ ಪೂಜೋ ವೇ ಹೋ ಜಾತೇ ಭವಪಾರ!! ಜಯ ಹೋ..! ಜಯ ಹೋ..!! ಜಯ-ಜಯ-ಜಯ ಹೋ..!!! 🙏🙏🙏